Skip to main content

ಕರ್ವಾಲೊ | ಕೆ.ಪಿ. ಪೂರ್ಣಚಂದ್ರ ತೇಜಸ್ವಿ | ಈ ಕಾದಂಬರಿಯ ಮೂಲಕ ಮೂಡಿಗೆರೆಯ ಪರಿಸರ-ಕಾನನಗಳ ಒಮ್ಮೆ ವಿಹರಿಸೋಣ ಬನ್ನಿ..

ಪುಸ್ತಕ: ಕರ್ವಾಲೊ 
ಲೇಖಕರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ 

ಇತ್ತೀಚೆಗೆ audio book ನತ್ತ ಸ್ವಲ್ಪ ಮೋಹ ಜಾಸ್ತಿ..
English Novels ಓದುವಾಗ ಅದೇ ಪುಸ್ತಕದ Audiobook ಕೇಳುತ್ತಾ, ಪುಸ್ತಕ‌ ಓದಿಕೊಂಡು‌ ಹೋಗುವ ಮಜವೇ ಬೇರೆ. (ಆಂಗ್ಲ ಭಾಷೆಯಲ್ಲಾದರೆ ಬರೀ audio book ಕೇಳುವಾಗ ಕೆಲವು ಶಬ್ದಗಳು, ಉಚ್ಚಾರಣೆ ಸ್ಪಷ್ಟವಾಗಿ ಗೊತ್ತಾಗುವುದಿಲ್ಲ). ಹೀಗೇ ಮೊನ್ನೆ ಒಮ್ಮೆ ಯಾವುದಾದರೂ ಕನ್ನಡ AudioBook ಸಿಗಬಹುದಾ ಎಂದು ನಮ್ಮ ಬಡವರ ಬಂಧು YouTube ನಲ್ಲಿ ತಡಕಾಡುತ್ತಿದ್ದಾಗ "ಬನ್ನಿ ಓದೋಣ" ಎಂಬ Channel ಸಿಕ್ಕಿತು. ಅದರಲ್ಲಿ ಪೂಚಂತೇ ಯವರ ಈ ಕಾದಂಬರಿಯ ಕಂಡೆ! ತೇಜಸ್ವಿಯವರ ಕಾದಂಬರಿಗಳನ್ನು ಓದುವ ಬಯಕೆ ಮೊದಲಿಂದಲೇ ಇತ್ತು.. Lockdown ಸಂದರ್ಭ ಪೋಸ್ಟಾಫೀಸು PDF ಅರ್ಧ ಓದಿದ್ದೆ, ಕಾರಣಾಂತರಗಳಿಂದ ಮುಂದೆ ಓದಲು ಸಾಧ್ಯವೇ ಆಗಿರಲಿಲ್ಲ. ಈ AudioBook ಸಿಕ್ಕಿದ್ದು ತುಂಬಾ ಖುಷಿಯಾಯಿತು! ತಡಮಾಡದೇ ಕೇಳಲಾರಂಭಿಸಿದೆ...

ಈ ಕಾದಂಬರಿಯ ಹೆಸರು ಕೇಳಿದೊಡನೆ, ಕಾಡುವ ಮೊಟ್ಟಮೊದಲ ಪ್ರಶ್ನೆ, "ಹೌದು, ಈ ಕರ್ವಾಲೋ ಅಂದರೆ ಏನು?" ಎಂದು. ಕರ್ವಾಲೋ, ಈ ಪುಸ್ತಕದಲ್ಲಿ ಬರುವ ಮುಖ್ಯಪಾತ್ರ. ಇವರು ಮೇಧಾವಿ ಪರಸರ ವಿಜ್ಞಾನಿ ಹಾಗೂ ಸಂಶೋಧಕ!
ಪೂಚಂತೇಯವರೂ ತಾವೇ ಒಂದು ಪಾತ್ರವಾಗಿ ಕಥೆಯ ನಿರೂಪಣೆ ಮಾಡುತ್ತಾರೆ. ಪೂಚಂತೇಯವರ ನಾಯಿ 'ಕಿವಿ'ಯದ್ದೂ ಪ್ರಮುಖ ಪಾತ್ರವೇ! ಎಡವಟ್ಟಿಗೇ ಹೆಸರಾದ ಮಂದಣ್ಣ ಅಂತ ಕರ್ವಾಲೋರ ಪಟ್ಟ ಶಿಷ್ಯ, ಕರಿಯಪ್ಪ ಎಂಬ ಶಿಕಾರಿ ಕಮ್ ಬಿರ್ಯಾನಿಗೇ ಜನಪ್ರಿಯನಾದ ಅಡುಗೆಯವ, ಫೋಟೋಗ್ರಾಫರ್ ಪ್ರಭಾಕರ, ಎಂಕ್ಟ ಎಂಬ ಹಾವು ಹಿಡಿಯುವವ, ಹೀಗೆ ಒಬ್ಬರಿಂದ ಒಬ್ಬರು ತಮ್ಮದೇ ಆದ ವಿಶೇಷತೆ ಹೊಂದಿರುವ ಪಾತ್ರಗಳು!!

ಜೇನುಹುಳು, ಜೇನುತುಪ್ಪದ ಹಲವು ವಿಧ, ಕೃಷಿ, ಹುಳು-ಹುಪ್ಪಟೆಗಳ ತೊಂದರೆಯಿಂದ ರಕ್ಷಣೆ, ವಿವಿಧ ರೀತಿಯ ಹಲವು ಪ್ರಾಣಿಗಳ ಬಗ್ಗೆ ಮಾಹಿತಿಯನ್ನೂ ಜೊತೆಜೊತೆಯಲ್ಲೇ ನೀಡಲಾಗಿದೆ.
ಜೇನುಹುಳಗಳಿಂದ ಕಚ್ಚಿಸಿಕೊಳ್ಳಬೇಕಾದ ಸಂದರ್ಭ,
ಪುಟ್ಟ ಪುಟ್ಟ ಖುಷಿ, ಸಣ್ಣ ಸಣ್ಣ ಮನಸ್ತಾಪ, ಇದ್ದಕ್ಕಿದ್ದಂತೆ ಎದುರಾಗುವ ತಲೆನೋವು-ಜಂಜಾಟಗಳು, ಇದರ ಮಧ್ಯೆ ಬರುವ ಬೈಗುಳಗಳು, ಹಾಸ್ಯಮಯ ಸಂಭಾಷಣೆಗಳ ಬಗ್ಗೆ ಎರಡು ಮಾತಿಲ್ಲ! ಹಾಸ್ಯ ಪಾತ್ರದಲ್ಲಂತೂ ಮಂದಣ್ಣನೇ ಹೀರೋ!

ಮೂಡಿಗೆರೆಯ ಜೇನು ಸೊಸೈಟಿಯ ಜೇನುತುಪ್ಪದಿಂದ ಆರಂಭವಾಗಿ, ಕಾಡಿನಲ್ಲಿ ಸಿಗುವ ಅಪರೂಪದ ಹಾರುವ ಓತಿಯ ಬಗ್ಗೆ ತಿಳಿದು ಅದನ್ನು ಹಿಡಿಯುವವರೆಗೆ, ಮಲೆನಾಡ ಮೂಡಿಗೆರೆಯ ಸುತ್ತಲಿನ ಹಳ್ಳಿ ಕಾಡುಗಳ ಸುಂದರ ಪರಿಸರದಲ್ಲೆಲ್ಲ ನಮ್ಮನ್ನೊಮ್ಮೆ ವಿಹಾರ ಮಾಡಿಸಿ ಬರುವ ಈ ಕಥೆ, ಕಣ್ಣ ಮುಂದೆಯೇ ಈ ಘಟನೆಗಳು ಆಗುತ್ತಿವೆಯೇನೋ ಎಂಬಂತೆ ಚಿತ್ರಿಸಲಾದ ಅತ್ಯಪೂರ್ವ ನಿರೂಪಣೆಯ ವೈಖರಿ, ಪರಿಸರ ವಿಜ್ಞಾನವನ್ನು ಕೂಡಿಕೊಂಡ ತೇಜಸ್ವಿಯವರ ಅಮೋಘ ಕಲ್ಪನೆ - ವರ್ಣನಾತೀತ!
ಹೀಗೆ ತುಂಬಾ ಇಷ್ಟಪಟ್ಟು ಕರ್ವಾಲೊ ಕಾದಂಬರಿ ಓದಿ..‌.ಅಲ್ಲಲ್ಲ, ಕೇಳಿ ಮುಗಿಸಿದೆ. ಉಮೇಶ್ ಎಸ್. ಎಸ್. ಅವರ ಅಚ್ಚುಕಟ್ಟಾದ, ಸ್ಪಷ್ಟ ವಾಚನವನ್ನು ಸ್ಮರಿಸಲೇಬೇಕು. 

ಪದಗಳಲ್ಲಿ ಎಷ್ಟೇ ವರ್ಣಿಸಿದರೂ ಜಿಲೇಬಿಯ ರುಚಿ ತಿಂದ ಮೇಲೇ ತಿಳಿಯವುದಲ್ಲವೇ..? ಹಾಗಾಗಿ, ನೀವೂ ಇದುವರೆಗೆ ಓದಿರದಿದ್ದರೆ ಪುರ್ಸೊತ್ತು ಮಾಡಿ ಓದಿ ನೋಡಿ, ಒಮ್ಮೆ ಬೇರೆಯೇ ಒಂದು ಲೋಕಕ್ಕೆ ಹೋಗಿಬರೋಣ....

Comments

Post a Comment

Popular posts from this blog

ಅಮ್ಮ

ಕರುಳ ಬಳ್ಳಿಯ ಸಂಬಂಧ.. ಜನ್ಮದಾತೆಯ ಜೊತೆಗಿನ ಅನುಬಂಧ.. ಈ ಭಾವ-ಬಂಧವು ಅಕ್ಷರಗಳಿಗೆ ನಿಲುಕದ್ದು.. ' ಅಮ್ಮ ' ಎಂಬೆರಡಕ್ಷರಕೆ ಸಾಲುಗಳೇ ಸೋಲುವವು.. ನವಮಾಸ ಗರ್ಭದಿ ರಕ್ಷಿಸಿ ಎನಗೆ ಜನ್ಮವ ನೀಡ್ದೆ..  ನಿನ್ನ ರೂಪವನೇ ಎನಗೂ ಇತ್ತೆ.. ತ್ಯಾಗಮಯಿ ತಾಯಿ ನೀನಾದೆ.. ಏನಾದರೇನು, ಪ್ರತಿ ಬಾರಿ ನೀ ಎನ್ನೊಡನಿದ್ದೆ.. ಮೊದಲ ಗುರುವಾಗಿ ನಿನ್ನ ಸಂಸ್ಕಾರ-ನಿಷ್ಠೆಗಳ ಹಸ್ತಾಂತರಿಸಿದೆ.. ನೀನೇ ಎನ್ನ ಪ್ರೀತಿಯ ಪುಟ್ಟು  ಪ್ರಪಂಚವಮ್ಮಾ.. ಅರೆಕ್ಷಣ ಜಗಳಾಡಿದರೂ ಮುನಿಸು ತೋರದೆ ಕ್ಷಮಿಸುವಾಕೆ.. ತಿಳಿಯದೆ ಮಾಡ್ವ ತಪ್ಪನ್ನೆಲ್ಲ ತಿದ್ದುವಾಕೆ.. ಸುಖ-ದುಃಖಗಳಲ್ಲಿ ನಿರತ ನನ್ನೊಡನಿರುವಾಕೆ.. ತಾನ್ಪಟ್ಟ ಕಷ್ಟಗಳ ತನ್ನ ಮಗುವು ಕಾಣಬಾರದೆಂದು ಬಯಸುವಾಕೆ.. ನೀನಿರದೆ ನಾನೆಲ್ಲಿ!? ಅಮ್ಮಾ..... ಎನಗೆ, ನೀ ಹಾಡುವ ಮಧುರ ಪದ್ಯಗಳ ಕೇಳುವಾಸೆ..  ಈ ದಿನದ ಆಗು-ಹೋಗುಗಳ ಕುರಿತು ನಿನಗ್ಹೇಳುವಾಸೆ..  ನಮ್ಮಿಬ್ಬರದೇ ಪ್ರಪಂಚದ ಕುರಿತು ಕ್ಷಣಕಾಲ ಚರ್ಚಿಸುವಾಸೆ..  ನಿನ್ನ ಮಮತೆಯ ಮಡಿಲಲ್ಲಿ ಪುಟ್ಟ ಕಂದನಾಗಿ ಮಲಗುವಾಸೆ... ನಿನ್ನ ಒಡಲದು ಭಾವದ ಕಡಲಮ್ಮಾ.. ಎನಗೆ ಜನ್ಮವಿತ್ತ ಜನನಿ ನಿನಗೆ ಜನುಮದಿನದ ಶುಭಾಶಯ ❤️                                    ಇಂತಿ ನಿನ್ನ ಪುಟ್ಟು - ಶ್ರೀಪದ

An unread notification!

Dear Almighty.. In praying you, she spent day n night yet, received no fruit! Oh there! I said, 'Your ambition must have been an unread notification!' Not to worry, he will clear that all the way; just like we do in the chats! For, he is the creator of pathway, to our ultimate destiny, Deepss !! - Anki

Sakhya: a short story

Sakhya Friendship is a unique bonding! 'Friends' are the humanised form of trust, affection and care, all dwelled in one.  Friends are a family! These buddies are the ones who are always with each other, for each other. This is the story of two such friends Sakhi and Maithri from a local high school in a village called Sakhpur.  Sakhi was studying in high-school when she met Maithri. They both were new students in the class. With new faces all around the class and difficulty in studying languages, Maithri approached Sakhi, the girl in the same boat, for help. They both helped each other, talked about overcoming their situation and eventually became friends. Close friends.  They started sharing everything; be it food, family matters, school, gossip, every damn  thing with each other. Even their families knew each other now. At times, Sakhi even felt like going to Maithri's home and spending time with her, doing combined studies, playing and all.  They...