Skip to main content

ಆದಿಕವಿಗರ್ಪಣೆ...

ರತ್ನಾಕರನೆಂಬ ಕಡು ನಿರ್ದಯಿಯಾಗಿ ಬೆಳೆದು,
ನಾರದ ಮುನಿಗಳಿಂದ ಪರಿವರ್ತಿತರಾಗಿ, 
ರಾಮ ಮಂತ್ರವ ಹಿಂದುಮುಂದಾಗಿ ಪಠಿಸುತ್ತಲೇ ಜೀವನವನ್ನು ಪಾವನವಾಗಿಸಿಕೊಂಡ, 
ಆದಿಕಾವ್ಯವ ಜಗಕ್ಕೆ ನೀಡಿದ, 
ಗರ್ಭವತಿ ಸೀರಜಾತೆಗೆ ಆಶ್ರಯವ ನೀಡಿ ಪಿತನಂತೆ ಸಲಹಿದ,
ಮಹಾಮಹಿಮ ಮಹರ್ಷಿ ವಾಲ್ಮೀಕಿಗಳು.. 

ಅದೆಷ್ಟು ಕಠೋರ ಹೃದಯ! ರತ್ನಾಕರನೆಂಬ ಹೆಸರು ಕೇಳಿದರೇ ಬೆಚ್ಚಿ ಹೋಗುವಷ್ಟು! ಕಾಡದಾರಿಯಲ್ಲಿ ಬರುವ ಜನರಿಗೆ ಭೀತಿ ಹುಟ್ಟಿಸಿ ಸುಲಭವಾಗಿ ಅವರ ಬಳಿಯಿದ್ದುದನೆಲ್ಲಾ ಸುಲಿದು, ತಾನೇನೋ ಆರಾಮವಾಗಿ ಪಾಪ ಕಟ್ಟಿಕೊಳ್ಳುತ್ತಿದ್ದ. ಹೆಸರಿಗೆ, ಮಾಡುವುದು ಯಾರ ಸಲುವಾಗಿ? ತನ್ನವರಿಗಾಗಿ! 

ಅಲ್ಲಿಗೆ, ಸದಾ ನಾರಾಯಣನ ನಾಮಧ್ಯಾನ ಮಾಡುವ ನಾರದ ಮುನಿಗಳ ಭೇಟಿ! ತನ್ನವರಿಗಾಗಿ ಇದನ್ನೆಲ್ಲಾ ಮಾಡುತ್ತಿರುವೆನೆಂದು ಅಷ್ಟು ಗಡದ್ದಾಗಿ ಹೇಳುತ್ತಿರುವೆಯೆಲ್ಲಾ, ನೀನು ಮಾಡಿದ ಈ ಪಾಪಗಳಲ್ಲಿ ನಿನ್ನವರೆಷ್ಟು ಪಾಲನ್ನು ಹೊರುತ್ತಾರೆ? ಎಂದು ಮುಹರ್ಷಿ ನಾರದರು ಕೇಳಿದ ಒಂದೇ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ, ಅದು ಹೇಗೆ ಅವರ ಬಾಳಿನ ದಿಕ್ಕನ್ನೇ ಸಂಪೂರ್ಣ ಬದಲಾಯಿಸಿಬಿಟ್ಟಿತು!! ರಾಮಲೀಲಿಯೇ ಸರಿ.

 'ರಾಮ' ಎಂದು ಸರಿಯಾಗಿ ಉಚ್ಛರಿಸಲರಿಯದಷ್ಟೂ ತುಂಬಿಕೊಂಡಿದ್ದ ಪಾಪವು, ರಾಮಧ್ಯಾನಮಾತ್ರದಿಂದಲೇ ಸಂಪೂರ್ಣ ನಶಿಸಿ ಪುಣ್ಯಾತ್ಮರೇ ಆಗಿ ಜಗತ್ತಿಗೇ ಮಹಾಕಾವ್ಯವ ನೀಡುವಂತಾಯಿತು ಮಹರ್ಷಿ ವಾಲ್ಮೀಕಿಗಳು. ತನ್ನ ತನುವನ್ನೇ ಹುತ್ತವಾವರಿಸಿಕೊಂಡು, ಕಣ್ಣಿಗೇ ಕುತ್ತಿದರೂ ಮಿಟುಕಾಡದೇ ರಾಮಧ್ಯಾನಲೀಲರಾದರೆಂದರೆ ಆ ಪರಿವರ್ತನೆ ಎಂಥದ್ದಾಗಿರಬಹುದು!? 

ಮುಂದೆ ಮಹರ್ಷಿಗಳಾಗಿ ಅದೆಷ್ಟು ಜ್ಞಾನಾರ್ಜನೆ ಮಾಡಿ, ಅದೆಷ್ಟು ವಿದ್ಯಾರ್ಥಿಗಳಿಗೆ ಗುರುಕುಲ ಶಿಕ್ಷಣ ನೀಡಿ, ಉನ್ನತ ವ್ಯಕ್ತಿಗಳಾಗಿ ಬೆಳಗಿಸಿದರೋ! ತಮ್ಮದೇ ಕೃತಿಯಲ್ಲಿ ತನ್ನ ಬಗ್ಗೆ ಉಲ್ಲೇಖಿಸದೇ, ಹೆಸರೆಂಬ ಕೆಸರಿಗೆ ಬೀಳದೇ, ಜಗದ ಆದಿಕಾವ್ಯವನ್ನು ರಚಿಸಿ, ತುಂಬು ಗರ್ಭಿಣಿ ರಾಮಸತಿ ಸೀತೆಗೆ ತಮ್ಮಾಶ್ರಮದಿ ಆಶ್ರಯ ನೀಡಿ, ತಂದೆಯಂತೆ ವಾತ್ಸಲ್ಯ ನೀಡಿ, ನಲ್ಮೆಯಿಂದ ಸಲಹಿ,  ರಾಮನ ಮಕ್ಕಳಿಗೆ ಗುರುವಾಗಿ, ಲವ-ಕುಶರಿಂದಲೇ ರಾಮಾಯಣವ ಲೋಕಕ್ಕೆ‌ ಪರಿಚಯಿಸಿದ ಮಹಾಮುನಿ..

ಮಹರ್ಷಿ ವಾಲ್ಮೀಕಿಗಳ ಜೀವನಚರಿತ್ರೆಯನ್ನು ಕಲಿತು, ಅರಿತು, ನಾವೂ ನಮ್ಮ‌ ಬಾಳಿನಲ್ಲಿ ಅಲ್ಪ-ಸ್ವಲ್ಪವಾದರೂ ರೂಢಿಸಿಕೊಂಡರೆ!? 
ಅವರ ಜೀವನಪಾಠವೇ 'ಆ ರಾಮನ ಧ್ಯಾನ ಮಾಡು. ಅವನಿಗೆ ಶರಣಾದರೆ ಸಾಕು, ನಿನ್ನ ಜೀವ-ಜೀವನವನ್ನು ಅವನೇ ಸಾರ್ಥಕಗೊಳಿಸುವನು ಎಂಬುದಲ್ಲವೇ!?'

ಪುಣ್ಯಾತ್ಮರ ಸ್ಮರಣೆಯಿಂದ ನಮಗೂ ಒಳಿತಾಗುವುದಂತೆ..
ರಾಮನ ಸೇವಕನಾಗುವ ಭಾಗ್ಯ ನಮಗಿಹುದೋ..‌ಇಲ್ಲವೋ.. !?
ಆದರೆ ರಾಮನ ಸೇವಕನ ಸೇವಕನ ಸೇವಕರಾಗಿ ಭಾವದಿಂದ ಭಜಿಸಿ, ಜಪಿಸಿ, ಪಠಿಸುವ ಭಾಗ್ಯವಂತೂ ಸದಾ ನಮ್ಮದು.. 
ಅದಕ್ಕಾಗಿ ವಾಲ್ಮೀಕಿ ಮಹರ್ಷಿಗಳ ಸ್ಮರಣೆ ಇಂದೂ, ಮುಂದೂ, ಅನವರತವೂ ನಮ್ಮ ಮನದಿ ನಡೆಯುತಿರಲಿ.. ✨🙏🏻✨

ಮಹರ್ಷಿ ವಾಲ್ಮೀಕಿಗಳ ಬಗ್ಗೆ ತಿಳಿದಿರುವುದು ಅಲ್ಪ, ತಿಳಿಯಲಿರುವುದು ಅಪಾರ.. ನನಗೆ, ನನ್ನಂತಹ ಹಲವಾರು ಪಾಮರಜೀವಗಳಿಗೆ ಇಂತಹ ಮಹಾಮಹಿಮರ ಬಗ್ಗೆ ತಮ್ಮ ಪ್ರವಚನಗಳಲ್ಲಿ ನಮಗೆಲ್ಲ ಪರಿಚಯಿಸುವ, ಮನದೊಳಗಿಳಿಸುವ ನಮ್ಮ ಕುಲಗುರುಗಳಿಗೆ ಅನಂತ ನಮನ.. ✨🙏🏻✨

-ಶ್ರೀಪದ

Comments

  1. ತುಂಬಾ ಚಂದದ,ಭಾವದ ಬರಹ ..ಅಂಕಿತಾ..👌👍🙏

    ReplyDelete

Post a Comment

Popular posts from this blog

ಪುಟ್ಟ ಪುಟ್ಟ ಕ್ಷಣಗಳ ಆನಂದದಿ ಕಳೆಯುತಾ..

'ಸಮಯ' ಬಹು ಅಮೂಲ್ಯ!  ಅದರಲ್ಲೂ, ಚಿಕ್ಕಪುಟ್ಟ ಮಕ್ಕಳೊಡನೆ ಕಳೆವ ಸಮಯವಂತೂ ಅತಿ ಮಧುರವಾದ್ದು ಮತ್ತು ಮನಕೆ ಉಲ್ಲಾಸ ನೀಡುವಂಥದ್ದು..✨  ಅದೆಷ್ಟು ಸುವಿಚಾರಗಳು, ಅದೆಷ್ಟು ಪುಟ್ಟ ಪುಟ್ಟ ಖುಷಿ, ಅದೆಷ್ಟು ಮುಗ್ಧತೆ ತುಂಬಿದ ಹೊತ್ತು!  ಕೆಲವೊಂದು ಹಳೆಯ ವಿಷಯಗಳೂ ಅವರ ಬಾಯಲ್ಲಿ ಕೇಳುವಾಗ ಅದೆಷ್ಟು ಹೊಸದೆನಿಸುತದೆ!!  ಅವರ ಜೊತೆಗೆ ನಮ್ಮ ಸೃಜನಶೀಲತೆಯೂ  ತಕ್ಕ ಮಟ್ಟಿಗೆ ಬೆಳೆಯುವುದು ಸುಳ್ಳಲ್ಲ.. ಇಷ್ಟೆಲ್ಲ ಅನಿಸಿದ್ದೇಕೆಂದರೆ, ನಾನು ಒಂದಿಡೀ ದಿನ ೪ನೇ ತರಗತಿಯ ಒಂದು ಪುಟ್ಟ ಬಾಲೆಯೊಡನೆ ಕಳೆದೆ!! ಅವಳೇ ದೀಪಿಕಾ !!  ನಂತೂರಿನ ಶ್ರೀಭಾರತೀ ಕಾಲೇಜಿನ ಅನ್ನಶ್ರೀ ಅನ್ನಕುಟೀರದ ಅಡಿಗೆಭಟ್ಟರು ರವಿ ಅಣ್ಣ, ಅವರ ಮಗಳೇ ದೀಪಿಕಾ.  ಮೊದಲು ಮಿತವಾದ ಮಾತು. ಸುಮಾರು ಪ್ರಶ್ನೆಗಳನ್ನುಇ ಕೇಳಾಯಿತು, ಸುಮಾರು ಉತ್ತರಗಳೂ ಬಂದಾದವು! ಮತ್ತೆ ಅಲ್ಪ ಹೊತ್ತಿನಲ್ಲಿ, ಆಕೆಯೇ ಹಾರಾಡುತ್ತಿದ್ದ ಹಕ್ಕಿಯ ತೋರಿಸಿ ಮಾತಾಡತೊಡಗಿದಳು. ಹೀಗೆ ಮಾತು ಬೆಳೆಯುತ್ತಾ ಹೋದಂತೆ ತನ್ನ ಮುಗ್ಧ ಭಾಷೆಯಲ್ಲಿ ಶಾಲೆ, ಅಣ್ಣ, ಗೆಳೆಯರು.. ಅವರ ಕುರಿತೆಲ್ಲಾ ಹೇಳತೊಡಗಿದಳು..  ಅವರು ೫ ಜನ ಗೆಳತಿಯರಂತೆ, ಶಾಲೆ ಪಕ್ಕ ಮರಕೋತಿ ಆಟವಾಡ್ತಾರಂತೆ, ಹಾಗೇ ಅವರ ಕ್ಲಾಸಲ್ಲೇ ಒಬ್ಬ ಟೀಚರ್ ಮಗಳು ಇದ್ದಾಳಂತೆ!! ಟೀಚರ್ ಮಗಳ ವಿಷಯದಲ್ಲಿ ರಾಜಕೀಯ ನಡೆವ ಕಥೆಯನ್ನೂ ಹೇಳಿದಳು. ಇದೆಲ್ಲಾ ಕೇಳಿದಾಗ ಈಗಷ್ಟೆ ಪದವಿ ಮುಗಿಸಿದ ನನಗೆ, ಬಾಲ್ಯದಲ್ಲಿ ನನ್ನ ತರಗತಿಯಲ್ಲಿದ್ದ ಟೀಚರ್

ಅಮ್ಮ

ಕರುಳ ಬಳ್ಳಿಯ ಸಂಬಂಧ.. ಜನ್ಮದಾತೆಯ ಜೊತೆಗಿನ ಅನುಬಂಧ.. ಈ ಭಾವ-ಬಂಧವು ಅಕ್ಷರಗಳಿಗೆ ನಿಲುಕದ್ದು.. ' ಅಮ್ಮ ' ಎಂಬೆರಡಕ್ಷರಕೆ ಸಾಲುಗಳೇ ಸೋಲುವವು.. ನವಮಾಸ ಗರ್ಭದಿ ರಕ್ಷಿಸಿ ಎನಗೆ ಜನ್ಮವ ನೀಡ್ದೆ..  ನಿನ್ನ ರೂಪವನೇ ಎನಗೂ ಇತ್ತೆ.. ತ್ಯಾಗಮಯಿ ತಾಯಿ ನೀನಾದೆ.. ಏನಾದರೇನು, ಪ್ರತಿ ಬಾರಿ ನೀ ಎನ್ನೊಡನಿದ್ದೆ.. ಮೊದಲ ಗುರುವಾಗಿ ನಿನ್ನ ಸಂಸ್ಕಾರ-ನಿಷ್ಠೆಗಳ ಹಸ್ತಾಂತರಿಸಿದೆ.. ನೀನೇ ಎನ್ನ ಪ್ರೀತಿಯ ಪುಟ್ಟು  ಪ್ರಪಂಚವಮ್ಮಾ.. ಅರೆಕ್ಷಣ ಜಗಳಾಡಿದರೂ ಮುನಿಸು ತೋರದೆ ಕ್ಷಮಿಸುವಾಕೆ.. ತಿಳಿಯದೆ ಮಾಡ್ವ ತಪ್ಪನ್ನೆಲ್ಲ ತಿದ್ದುವಾಕೆ.. ಸುಖ-ದುಃಖಗಳಲ್ಲಿ ನಿರತ ನನ್ನೊಡನಿರುವಾಕೆ.. ತಾನ್ಪಟ್ಟ ಕಷ್ಟಗಳ ತನ್ನ ಮಗುವು ಕಾಣಬಾರದೆಂದು ಬಯಸುವಾಕೆ.. ನೀನಿರದೆ ನಾನೆಲ್ಲಿ!? ಅಮ್ಮಾ..... ಎನಗೆ, ನೀ ಹಾಡುವ ಮಧುರ ಪದ್ಯಗಳ ಕೇಳುವಾಸೆ..  ಈ ದಿನದ ಆಗು-ಹೋಗುಗಳ ಕುರಿತು ನಿನಗ್ಹೇಳುವಾಸೆ..  ನಮ್ಮಿಬ್ಬರದೇ ಪ್ರಪಂಚದ ಕುರಿತು ಕ್ಷಣಕಾಲ ಚರ್ಚಿಸುವಾಸೆ..  ನಿನ್ನ ಮಮತೆಯ ಮಡಿಲಲ್ಲಿ ಪುಟ್ಟ ಕಂದನಾಗಿ ಮಲಗುವಾಸೆ... ನಿನ್ನ ಒಡಲದು ಭಾವದ ಕಡಲಮ್ಮಾ.. ಎನಗೆ ಜನ್ಮವಿತ್ತ ಜನನಿ ನಿನಗೆ ಜನುಮದಿನದ ಶುಭಾಶಯ ❤️                                    ಇಂತಿ ನಿನ್ನ ಪುಟ್ಟು - ಶ್ರೀಪದ

The King of Shravasti, a forgotten warrior | Legend of Suheldev - The King who saved India | Author Amish | Book review

Genre : Historical mythology I have always loved history and 'm always keen to learn about the things which were happened in real, especially the warriors who fought for motherland, make me get inspired. So, soon after looking at the attractive cover and good reviews, thought of taking up to read, 'Suheldev' by one of the best selling Indian authors, Amish Tripathi. This book is written by Amish with the assistance of writer's club, a group of writers and researches who helped him with the overall outcome of the book. This book explains the story of Suheldev, a great warrior in the history of Bharath, from a small kingdom of Shravasti, which is now located in Uttar Pradresh.  The novel is mainly written in the way, that shows the strength of unity. The way of writing is amazing. There are some parts of the novel which really make the reader curious and some parts are emotional too. It also values friendship and loyalty. The author has done a commendable job in bringin