🌸12th April, 1934 - 12th December, 2002🌸 ಇಂದು, ಸಾಹಿತ್ಯ ಶಿರೋಮಣಿ ನೀರ್ಪಾಜೆ ಭೀಮ ಭಟ್ ಅವರ 87 ನೇ ಜಯಂತ್ಯುತ್ಸವ✨ ಅಜ್ಜ ತೀರಿಹೋದಾಗ ನನಗೆ ಎರಡೇ ವರ್ಷ!! ಆದರೂ ಮನಸ್ಸಿನ ಒಂದು ಮೂಲೆಯಲ್ಲಿ ಒಂಥರಾ ಅಚ್ಚಳಿಯದ ಅಜ್ಜನ ನೆನಪು.. ನಾ ಪುಟ್ಟವಳಿದ್ದಾಗ "ನೀ ಬರೆಯಕ್ಕು ಪುಳ್ಳಿ...ತುಂಬಾ ಬರೆಯಕ್ಕು" ಎಂದು ನನ್ನನ್ನು ಬಳಿ ಕರೆದು ಯಾವಾಗಲೂ ಹೇಳುತ್ತಿದ್ದರೆಂದು ಎನ್ನಮ್ಮ ಈಗಲೂ ನೆನಪಿಸಿಕೊಳ್ಳುತ್ತಾರೆ. ಇಂದು ನಾನು ಬರವಣಿಗೆಯತ್ತ ಪುಟ್ಟ ಹೆಜ್ಜೆಯಿಡುತ್ತಿದ್ದೇನೆಂದರೆ, ಅದಕ್ಕೆ ಕಾರಣ ಅಜ್ಜನಿಂದಲೇ ಬಳುವಳಿಯಾಗಿ ಬಂದ 'ಸಾಹಿತ್ಯ ಪ್ರೇಮ' ಎಂದರೆ ತಪ್ಪಾಗಲಾರದೇನೋ!! ನೀವು ನಮ್ಮ ಮನದ ಮೂಲೆಯಲ್ಲಿ ಸದಾ ನೆಲೆಯಾಗಿರುವಿರಿ.. ಸದಾ ನಿಮ್ಮ ಸ್ಮರಣೆಯಲ್ಲಿ.... ನಿಮ್ಮ ಪುಳ್ಳಿ...🙏🏻🙏🏻 - ಶ್ರೀಪದ 🌸
an unknown journey towards the destiny...